ಅಂಜನಾಸುತನಿಗೆ ನಲವತ್ತು
ನಮನಗಳು
(Hanuman Chalisa in Kannada)
by Mrs.S. Mangala Satyan (ಎಸ್. ಮಂಗಳಾ ಸತ್ಯನ್)
Kannada Novelist, 912, "Sree Ganesh", 5th Main, 1st Stage,
Aravindanagar, Mysore-570023, Karnataka, India. (Ph.9448434550; 9342187774; 8277417217)
E-Mail: esmangala@gmail.com; mangala_mys@yahoo.co.in
Website: http://esmangala.wix.com/mangala-1940;
http://mangalasatyan.tripod.com
*** *** *** ***
ಮಹಾಜ್ನಾನಿ ಗುಣನಿಧಿ ವೀರ
ಹನುಮಾ|
ಮೂರುಲೋಕದಲ್ಲೂ ನೀನೆ ತೇಜೋ
ಮಹಿಮಾ|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧ ||
ಅಮಿತ ಪರಾಕ್ರಮಿ ನೀನೆ ರಾಮದೂತ
|
ವಾಯುಪುತ್ರ ನೀನೆ ಅಂಜನಾಸುತ
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨ ||
ವಜ್ರಕಾಯ ಹನುಮ ನೀನೆ ದುರುಳ
ಶಿಕ್ಷಕ |
ಸಜ್ಜನರ ಬಂಧು ನೀನೆ ಶಿಷ್ಟ
ರಕ್ಷಕ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩ ||
ಕರ್ಣಕುಂಡಲಧಾರಿ ಸ್ವರ್ಣಕಾಯನೆ
|
ಸುರುಳಿಕೇಶ ಸುಂದರಾ ವಾನರೇಶ
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೪ ||
ನಿನ್ನ ಕರಗಳೊಳಗೆ ಇಹುದು
ವಜ್ರಧ್ವಜಗಳು |
ಉಡಿದಾರ ಮೌಂಜಿಯಾ ಬ್ರಹ್ಮಚಾರಿಯು
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೫ ||
ಸರ್ವ ಲೋಕ ವಂದಿತಾ ಕೇಸರೀಸುತ
|
ಸರ್ವ ಜನ ರಕ್ಷಕಾ ವೀರ ನಾಯಕಾ
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೬ ||
ಸದಾ ಸಿದ್ಧ ಹಸ್ತ ನೀ ರಾಮ
ಸೇವಕಾ |
ಸಕಲ ಜ್ನಾನಿ ಗುಣಶೀಲ ಭಕ್ತಪಾಲಕಾ
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೭ ||
ರಾಮನಾಮ ಆಲಿಸಲು ಸದಾ ನಿರತನು
|
ನಿನ್ನ ಹೃದಯದಲ್ಲಿ ಇಹರು
ಸೀತಾ ರಾಮರು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೮ ||
ಸೀತೆಗಾಗಿ ತೋರಿ ನೀನು ಸೂಕ್ಷ್ಮರೂಪವಾ
|
ಲಂಕೆಯಲಿ ತೋರಿ ನೀನು ಘೋರರೂಪವಾ
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೯ ||
ರಾಮಕಾರ್ಯ ಚತುರ ನೀ ಭೀಮಕಾಯನು
|
ದೈತ್ಯ ಸಂಹಾರಿ ನೀನು ವೀರ
ಹನುಮನೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೦ ||
ಲಕ್ಷ್ಮಣನಾ ಉಳಿಸಲೆಂದು
ತಂದೆ ಮೂಲಿಕೆ |
ಪಾತ್ರನಾದೆ ನೀನು ರಾಮನಂತರಾಳಕೆ
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೧ ||
ನಿನ್ನ ಸೇವೆಯನ್ನು ಕಂಡು
ರಾಮಚಂದ್ರನು |
ಭರತಗೆ ಸರಿಸಾಟಿ ಎಂದು ತಿಳಿದನು
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೨ ||
ಹನುಮ ನಿನ್ನ ಪ್ರೇಮದಿಂದ
ರಾಮ ತೃಪ್ತನು |
ರಾಮ ಕೃಪೆಗೆ ಪಾತ್ರನಾದೆ
ನೀನೆ ಧನ್ಯನು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೩ ||
ಬ್ರಹ್ಮಪುತ್ರ ಆದಿಶೇಷ ಸನಕ
ಮುನಿಗಳು |
ದೇವಗಣಗಳೆಲ್ಲ ಸೇರಿ ಸ್ತುತಿಯ
ಗೈದರು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೪ ||
ವಾಯು ವರುಣ ಇಂದ್ರ ಅಗ್ನಿ
ಯಮ ಕುಬೇರರು |
ನಿನ್ನ ಮಹಿಮೆ ಹಾಡಿ ಹೊಗಳಿ
ಹರುಷಪಟ್ಟರು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
||೧೫ ||
ಸುಗ್ರೀವನಿಗೆ ನೀನು ರಾಜ್ಯ
ಕೊಡಿಸಿದೆ |
ರಾಮ ಸುಗ್ರೀವರಲಿ ನೀನು
ಸ್ನೇಹ ಬೆಳೆಸಿದೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನ್ನಯಾ ಚರಣಕೆ ನನ್ನ
ನಮನವು || ೧೬ ||
ನೀ ಮಾಡೆ ಉಪದೇಶವ ವಿಭೀಷಣನಿಗೆ
|
ರಾಮನಿಂದ ಅರಸನಾದ ಅವನು
ಲಂಕೆಗೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೭ ||
ಸೂರ್ಯನನ್ನು ಹಣ್ಣು ಎಂದು
ನೀನು ತಿಳಿಯುತಾ |
ಕ್ಷಣಮಾತ್ರದಿ ಆಗಸಕ್ಕೆ
ನೀನು ಹಾರಿದೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೮ ||
ರಾಮಮುದ್ರಿಕೆ ಹಿಡಿದು ಜಲಧಿ
ದಾಟಿದೆ |
ಲೀಲಾತೀತ ಸ್ವಾಮಿ ನೀನು
ಪರಮ ವೀರನೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೧೯ ||
ನಿನ್ನ ಕೃಪೆಯು ಒಂದೇ ಸಾಕು
ಇದ್ದರೆಮಗೆ |
ಸಕಲ ಕಾರ್ಯದಲ್ಲಿ ಸಿದ್ಧಿ
ಹಲವು ಬಗೆಬಗೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೦ ||
ದಾಸನಾದೆ ಹನುಮ ನೀನು ರಾಮಚಂದ್ರಗೆ
|
ಪ್ರಭುವ ಕಾಣಬಹುದೆ ನೀನು
ಕೃಪೆಯ ತೋರದೆ |
ನಿನ್ನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ ನಮನವು
|| ೨೧ ||
ರಾಮಭಕ್ತ ಹನುಮ ನೀನು, ನಿನಗೆ
ಜಯ ಜಯ |
ನೀನು ದಯವ ತೋರಲೆಮಗೆ ಇರುವುದೆ
ಭಯ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೨ ||
ಅಮಿತ ಶೂರ ಧೀರ ನೀನು ಪರಮಪವಿತ್ರ
|
ಮೂರು ಲೋಕದಲ್ಲೂ ನೀನು ಪೂಜೆಗೆ
ಪಾತ್ರ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೩ ||
ಶಕ್ತಿ ಯುಕ್ತಿ ಹನುಮ ನಿನ್ನ
ದಿವ್ಯ ನಾಮವು |
ಸ್ಮರಣೆಯಿಂದ ಭೂತ ಪ್ರೇತ
ಬಾಧೆ ಕಳೆವುದು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೪ ||
ಪವನ ಸುತನೆ ನಿನ್ನ ನಾಮ ರೋಗ
ಕಳೆವುದು |
ಬಿಡದೆ ಜಪಿಸುತಿರಲು ಸರ್ವ
ಪೀಡೆ ನಾಶವು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೫ ||
ಭಕ್ತಿಯಿಂದ ಪೂಜಿಸುವವರ
ಕಷ್ಟ ಕಳೆಯುವೆ |
ನಂಬಿದವರ ಕೈಯ ಬಿಡದೆ ನೀನು
ಸಲಹುವೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೬ ||
ನಿನ್ನ ಸ್ವಾಮಿ ರಾಮಚಂದ್ರ
ಸರ್ವ ರಕ್ಷಕ |
ಅವನ ದಾಸ ಹನುಮ ನೀನು ಭಕ್ತ
ಪಾಲಕ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೭ ||
ಕೋರುವವಗೆ ವರವ ಕೊಡುವ ದಯಾಸಾಗರ
|
ನಂಬಿದವರ ಬಾಳಿಗೆ ನೀನೇ
ಆಧಾರ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೮ ||
ಯುಗ ಯುಗದಲೂ ತುಂಬಿಹುದು
ನಿನ್ನ ಕೀರುತಿ |
ಜಗದೊಳೆಲ್ಲ ಕಾಣುತಿಹುದು
ನಿನ್ನ ಮೂರುತಿ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೨೯ ||
ಶಿಷ್ಟ ರಕ್ಷಕನು ನೀನು ದುಷ್ಟ
ಶಿಕ್ಷಕ |
ರಾಮನಿಗೆ ಪ್ರೀತಿಪಾತ್ರ
ಹನುಮ ನಾಯಕ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೦ ||
ಸೀತೆ ಒಲಿದು ನಿನಗೆ ಇತ್ತ
ಸಕಲ ಸಿದ್ಧಿಯಾ |
ನಿನ್ನ ನಂಬಿದವರಿಗೆಲ್ಲ
ನೀನು ನೀಡಿದೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನ್ನಯಾ ಚರಣಕೆ ನನ್ನ
ನಮನವು || ೩೧ ||
ಹಗಲು ರಾತ್ರಿ ಹನುಮ ನಿನಗೆ
ರಾಮಧ್ಯಾನವು |
ಕರುಣಿಸೆಮಗೆ ಹನುಮ ನೀನು
ಮಧುರನಾಮವ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೨ ||
ನಿನ್ನ ನಾವು ಪೂಜಿಸಿದರೆ
ರಾಮನೊಲಿವನು |
ಕರುಣೆಯಿಂದ ಅವನು ನಮ್ಮ
ಪಾಪ ಕಳೆವನು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೩ ||
ಜನುಮ ಜನುಮದಲ್ಲಿ ಮೋಕ್ಷಪಡೆದ
ಭಕ್ತರು |
ಸಲಹೆ ನೀನು ಆಗುವರು ರಾಮಭಕ್ತರು
|
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೪ ||
ಬೇಡ ಬೇಡ ಎಮಗೆ ಅನ್ಯ ದೈವದ
ಚಿಂತೆ |
ನೀನು ನಮಗೆ ಕರುಣೆ ತೋರೆ
ಏತಕೆ ಚಿಂತೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೫ ||
ಹನುಮ ನೀನು ನಂಬಿದವರ ಕಷ್ಟ
ಕಳೆಯುವೆ |
ಕೋರಿದುದನು ನೀಡಿ ನೀನು
ಪೀಡೆ ಹರಿಸುವೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೬ ||
ಧೀರ ನೀನು, ಶೂರ ನೀನು, ರಾಮನ
ದೂತ |
ಕೃಪೆಯ ಮಾಡಿ ಕರುಣೆ ತೋರು
ಅಂಜನಾಸುತ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೭ ||
ನೂರು, ಮತ್ತೊಂದು ಬಾರಿ ಪಠಿಸೆ
ಸ್ತೋತ್ರವ |
ಅವರಿಗೆಲ್ಲ ಕೊಡುವೆ ನೀನು
ಪರಮ ಮೋಕ್ಷವ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೮ ||
ನಿನ್ನ ಸ್ತೋತ್ರ ಹೇಳುವವಗೆ
ಸಿದ್ಧಿ ಖಚಿತವು |
ಸಾಕ್ಷಿ ಇಹುದು ಕೇಳು ಇದಕೆ
ಹರನ ವಚನವು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೩೯ ||
ಹರಿಯದಾಸ ತುಳಸಿದಾಸ ಇದನು
ರಚಿಸಿದ |
ಅವನ ಹೃದಯ ಮಂದಿರದಲ್ಲಿ
ನಿನ್ನಯ ವಾಸ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೪೦ ||
ಬರೆದ ಗೋಸ್ವಾಮಿ ಇದನು ಎರಡು
ವಿಂಶತಿ |
ಇದನು ಪಠಣ ಮಾಡಿದಾಗ ಶೋಕ
ಅವನತಿ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೪೧ ||
ಹನುಮ ನಿನ್ನ ಸ್ತುತಿಯ ಮಾಡೆ
ಹರಿಯು ಒಲಿವನು |
ಸಾಡೆಸಾತಿ ಎಲ್ಲ ದೋಷ ಅವನು
ಕಳೆವನು |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೪೨ ||
ಹನುಮ ನಾನು ಬರೆದೆನಿದನು
ತಾಯಿನುಡಿಯಲಿ |
ನಿನ್ನ ಸ್ತೋತ್ರ, ನಿನ್ನ
ಭಾಷೆ, ನಿನಗೆ ಅರ್ಪಣೆ |
ನಿನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ ನಮನವು
|| ೪೩ ||
= "ಸತ್ಯ" ನಿತ್ಯ, ಹನುಮ ನಮ್ಮ
ಕಷ್ಟಕೆ
|